VyasaOnline ಕೈಕೇಯ-ರಾಕ್ಷಸ ಸಂವಾದ

  • Thread starter Ramesh Banadakoppa Manjappa
  • Start date
R

Ramesh Banadakoppa Manjappa

Guest

ಭೀಷ್ಮ-ಯುಧಿಷ್ಠಿರ ಸಂವಾದ: ರಾಜಧರ್ಮ - 5


ಓಂ' ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು | things-you-dint-know-about-om - Kannada BoldSky


ಯಾರ ವಿತ್ತದ ಮೇಲೆ ರಾಜನ ಅಧಿಕಾರವಿರುತ್ತದೆ ಎನ್ನುವ ಯುಧಿಷ್ಠಿರನ ಪ್ರಶ್ನೆಗೆ ಭೀಷ್ಮನು ಹೇಳಿದ ಕೇಕಯರಾಜ-ರಾಕ್ಷಸ ಸಂವಾದವು ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅಧ್ಯಾಯ 78ರಲ್ಲಿ ಬರುತ್ತದೆ.

***

ಯುಧಿಷ್ಠಿರನು ಹೇಳಿದನು:

“ಭರತರ್ಷಭ! ಪಿತಾಮಹ! ಯಾರ ವಿತ್ತದ ಮೇಲೆ ರಾಜನ ಅಧಿಕಾರವಿರುತ್ತದೆ? ರಾಜನು ಯಾವ ವೃತ್ತಿಯನ್ನು ಅವಲಂಬಿಸಿರಬೇಕು? ಅದನ್ನು ನನಗೆ ಹೇಳು.”

ಭೀಷ್ಮನು ಹೇಳಿದನು:

“ಬ್ರಾಹ್ಮಣನಲ್ಲದವರೆಲ್ಲರ ವಿತ್ತದ ಸ್ವಾಮಿಯು ರಾಜನೆಂದು ವೇದಸಿದ್ಧಾಂತ. ತಮ್ಮ ಕರ್ಮಗಳಲ್ಲಿ ತೊಡಗಿರದೇ ಇದ್ದ ಬ್ರಾಹ್ಮಣರ ಸ್ವತ್ತೂ ರಾಜನದ್ದೇ ಎಂದು ಹೇಳುತ್ತಾರೆ. ತಮ್ಮ ಕರ್ಮಗಳಲ್ಲಿ ತೊಡಗಿರದೇ ಇರುವ ಬ್ರಾಹ್ಮಣರನ್ನು ಎಂದೂ ರಾಜನು ಉಪೇಕ್ಷಿಸಬಾರದು. ಇದು ಹಿಂದಿನ ರಾಜರುಗಳ ನಡತೆ ಎಂದು ಸಾಧುಗಳು ಹೇಳುತ್ತಿರುತ್ತಾರೆ. ರಾಜ್ಯದಲ್ಲಿ ಬ್ರಾಹ್ಮಣನು ಕಳ್ಳನಾಗುವುದಕ್ಕೆ ರಾಜನೇ ಅಪರಾಧಿ ಎಂದೂ ಅವನಿಗೇ ಆ ಪಾಪವು ತಗಲುತ್ತದೆಯೆಂದೂ ಅಭಿಪ್ರಾಯವಿದೆ. ಆಗಿನ ಕಾಲದ ರಾಜರೂ ಕೂಡ ಬ್ರಾಹ್ಮಣರು ಧರ್ಮಭ್ರಷ್ಟರಾಗಲು ತಾವೇ ಕಾರಣರೆಂದು ತಿಳಿದುಕೊಳ್ಳುತ್ತಿದ್ದರು. ಆದುದರಿಂದ ರಾಜರ್ಷಿಗಳು ಎಲ್ಲ ಬ್ರಾಹ್ಮಣರನ್ನೂ, ಧರ್ಮಭ್ರಷ್ಟರಾಗದ ರೀತಿಯಲ್ಲಿ ಪರಿಪಾಲಿಸುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾಗಿರುವ ರಾಕ್ಷಸನಿಂದ ಅಪಹರಿಸಲ್ಪಟ್ಟ ಕೇಕಯರಾಜನ ಗೀತೆಯನ್ನು ಉದಾಹರಿಸುತ್ತಾರೆ.

***

ಅರಣ್ಯದಲ್ಲಿ ಸಂಶಿತವ್ರತನಾಗಿ ಸ್ವಾಧ್ಯಾಯ ನಿರತನಾಗಿದ್ದ ಕೇಕಯರ ಅಧಿಪತಿಯನ್ನು ಓರ್ವ ದಾರುಣ ರಾಕ್ಷಸನು ಹಿಡಿದುಕೊಂಡನು. ಆಗ ರಾಜನು ಹೇಳಿದನು:

“ನನ್ನ ಜನಪದದಲ್ಲಿ ಕಳ್ಳನಿಲ್ಲ, ನೀಚನಿಲ್ಲ. ಮದ್ಯಪಾನ ಮಾಡುವವನೂ ಇಲ್ಲ. ಅಗ್ನಿಹೋತ್ರವನ್ನು ಮಾಡದವನು, ಯಜ್ಞವನ್ನು ಮಾಡದವನು ಯಾರೂ ಇಲ್ಲ. ಹೀಗಿದ್ದರೂ ನೀನು ನನ್ನ ದೇಹವನ್ನು ಪ್ರವೇಶಿಸಿರುವೆ! ನನ್ನ ರಾಜ್ಯದಲ್ಲಿ ವಿದ್ವಾಂಸನಲ್ಲದ ಬ್ರಾಹ್ಮಣನಿಲ್ಲ. ಉತ್ತಮ ವ್ರತಾನುಷ್ಠಾನಗಳನ್ನು ಮಾಡದವನು ಇಲ್ಲ. ಯಜ್ಞದಲ್ಲಿ ಸೋಮಪಾನವನ್ನು ಮಾಡದವನಿಲ್ಲ. ಅಗ್ನಿಯಿಲ್ಲದೇ ಇರುವವನಿಲ್ಲ. ಯಜ್ಞಮಾಡದವನಿಲ್ಲ. ಹೀಗಿದ್ದರೂ ನೀನು ನನ್ನ ಶರೀರವನ್ನು ಪ್ರವೇಶಿಸಿರುವೆ! ನನ್ನ ರಾಜ್ಯದಲ್ಲಿ ನಾನಾ ಆಪ್ತದಕ್ಷಿಣೆಗಳಿಂದ ಯಜ್ಞಗಳನ್ನು ಯಜಿಸುತ್ತಾರೆ. ಬ್ರಹ್ಮಚರ್ಯವ್ರತಧಾರಿಯಾಗದೇ ಯಾರೂ ವೇದಗಳನ್ನು ಕಲಿಯುವುದಿಲ್ಲ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ? ನನ್ನ ಬ್ರಾಹ್ಮಣರು ಸ್ವಕರ್ಮಸ್ಥರಾಗಿ ಅಧ್ಯಯನ, ಅಧ್ಯಾಪನ, ಯಜನ, ಯಾಜನ, ದಾನ ಮತ್ತು ಪ್ರತಿಗ್ರಹಣ ಈ ಆರು ಕರ್ಮಗಳಲ್ಲಿ ನಿರತರಾಗಿದ್ದಾರೆ. ಅವರು ಸತ್ಕರಿಸಲ್ಪಟ್ಟಿದ್ದಾರೆ. ಅವರು ಮೃದುಸ್ವಭಾವದವರು ಮತ್ತು ಸತ್ಯವಾದಿಗಳು. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ? ನನ್ನ ರಾಜ್ಯದ ಸತ್ಯಧರ್ಮವಿಶಾರದ ಕ್ಷತ್ರಿಯರು ಸ್ವಕರ್ಮದಲ್ಲಿ ನಿರತರಾಗಿದ್ದು ದಾನವನ್ನು ಕೇಳುವುದಿಲ್ಲ, ದಾನವನ್ನು ಕೊಡುತ್ತಾರೆ. ಅಧ್ಯಯನ ಮಾಡುತ್ತಾರೆ, ಅಧ್ಯಾಪನ ಮಾಡಿಸುವುದಿಲ್ಲ. ಯಜಿಸುತ್ತಾರೆ. ಯಾಜಕರಲ್ಲ. ಬ್ರಾಹ್ಮಣರನ್ನು ಪರಿರಕ್ಷಿಸುತ್ತಾರೆ ಮತ್ತು ಸಂಗ್ರಾಮದಿಂದ ಹಿಮ್ಮೆಟ್ಟುವುದಿಲ್ಲ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ? ನನ್ನ ದೇಶದ ವೈಶ್ಯರು ಸ್ವಕರ್ಮಗಳಲ್ಲಿ ನಿರತರಾಗಿದ್ದು ಮೋಸಮಾಡದೇ ಕೃಷಿ-ಗೋರಕ್ಷಣೆ-ವಾಣಿಜ್ಯಗಳಿಂದ ಉಪಜೀವನವನ್ನು ನಡೆಸುತ್ತಾರೆ. ಅವರು ಅಪ್ರಮತ್ತರೂ, ಕ್ರಿಯಾವಂತರೂ, ಸುವ್ರತರೂ ಸತ್ಯವಾದಿಗಳೂ ಆಗಿದ್ದಾರೆ. ಹಂಚಿಕೊಳ್ಳುವುದನ್ನೂ, ದಮ-ಶೌಚಗಳನ್ನೂ, ಸೌಹಾರ್ದತೆಯನ್ನೂ ಆಶ್ರಯಿಸಿದ್ದಾರೆ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ? ನನ್ನ ರಾಜ್ಯದ ಶೂದ್ರರು ಸ್ವಕರ್ಮಗಳಲ್ಲಿ ನಿರತರಾಗಿ ಅಸೂಯೆಯಿಲ್ಲದೇ ಮೂರು ವರ್ಣದವರನ್ನೂ ಸೇವೆಗೈಯುತ್ತಾರೆ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ? ನಾನು ಕೃಪಣರು, ಅನಾಥರು, ವೃದ್ಧರು, ದುರ್ಬಲರು, ರೋಗಿಗಳು ಮತ್ತು ಸ್ತ್ರೀಯರಿಗೆ ಅನ್ನ-ವಸ್ತ್ರಾದಿಗಳನ್ನಿತ್ತು ರಕ್ಷಿಸುತ್ತೇನೆ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ? ಕುಲ, ದೇಶ ಮತ್ತು ಜಾತಿ ಧರ್ಮಗಳನ್ನು ಯಥಾವಿಧಿಯಾಗಿ ಪಾಲಿಸಿಕೊಂಡು ಮತ್ತು ಯಾರೂ ಅದರಿಂದ ಚ್ಯುತಿಯಾಗದಂತೆ ನೋಡಿಕೊಳ್ಳುತ್ತಾ ಬಂದಿದ್ದೇನೆ. ಹೀಗಿದ್ದರೂ ನನ್ನ ಶರೀರವನ್ನು ನೀನು ಪ್ರವೇಶಿಸಿರುವೆ. ನನ್ನ ದೇಶದಲ್ಲಿರುವ ತಪಸ್ವಿಗಳನ್ನು ನಾನು ಪೂಜಿಸುತ್ತೇನೆ ಮತ್ತು ಪರಿಪಾಲಿಸುತ್ತೇನೆ. ಎಲ್ಲರಿಗೂ ಬೇಕಾದುದನ್ನು ಕೊಟ್ಟು ಸತ್ಕರಿಸಿದ್ದೇನೆ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ? ದೇವತೆ-ಪಿತೃ-ಅತಿಥಿಗಳಿಗೆ ನೀಡದೇ ನಾನು ಊಟಮಾಡುವುದಿಲ್ಲ. ಪರಸ್ತ್ರೀಯರನ್ನು ಸೇರುವುದಿಲ್ಲ. ಸ್ವಚ್ಛಂದನಾಗಿ ಕ್ರೀಡಿಸುವುದಿಲ್ಲ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ? ಬ್ರಹ್ಮಚಾರಿಯಾಗಿರದವನು ಭಿಕ್ಷೆ ಬೇಡುವುದಿಲ್ಲ. ಭಿಕ್ಷುವು ಬ್ರಹ್ಮಚರ್ಯವನ್ನು ಪಾಲಿಸದೇ ಇರುವುದಿಲ್ಲ. ಋತ್ವಿಜನಲ್ಲದವನು ಹೋಮಕಾರ್ಯಗಳನ್ನು ನಡೆಸುವುದಿಲ್ಲ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ? ವೃದ್ಧರು, ವಿದ್ವಾಂಸರು ಮತ್ತು ತಪಸ್ವಿಗಳನ್ನು ನಾನು ಅವಹೇಳನ ಮಾಡುವುದಿಲ್ಲ. ರಾಷ್ಟ್ರವು ನಿದ್ದೆಮಾಡುತ್ತಿರುವಾಗ ನಾನು ಜಾಗೃತನಾಗಿರುತ್ತೇನೆ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ? ನನ್ನ ಪುರೋಹಿತನು ವೇದಾಧ್ಯಯಸಂಪನ್ನನು. ತಪಸ್ವಿಯು. ಸರ್ವಧರ್ಮವಿದುವು. ರಾಜ್ಯದ ಎಲ್ಲವುಗಳ ಸ್ವಾಮಿ ಶ್ರೀಮಾನನು. ದಾನದಿಂದ ದಿವ್ಯ ಲೋಕಗಳನ್ನು ಬಯಸುತ್ತೇನೆ. ಅನಾಥ ಬ್ರಾಹ್ಮಣರನ್ನು ರಕ್ಷಿಸಿ ಸತ್ಯನಾಗಿದ್ದೇನೆ. ಶುಶ್ರೂಷೆಗಳಿಂದ ಗುರುಗಳನ್ನು ಪ್ರೀತಗೊಳಿಸಿದ್ದೇನೆ. ರಾಕ್ಷಸರಿಂದ ನನಗೆ ಭಯವೆನ್ನುವುದು ಇಲ್ಲ. ನನ್ನ ರಾಷ್ಟ್ರದಲ್ಲಿ ವಿಧವೆಯಿಲ್ಲ. ಅಧಮ ಬ್ರಾಹ್ಮಣನಿಲ್ಲ. ಬ್ರಾಹ್ಮಣರಲ್ಲಿ ಯಾರೂ ಕೃಪಣರೂ, ಕಳ್ಳರೂ, ಜೂಜುಗಾರನಾಗಲೀ, ಅನಧಿಕಾರಿಗಳಿಗೆ ಯಜ್ಞಮಾಡಿಸುವುದನ್ನಾಗಲೀ, ಪಾಪಕರ್ಮಗಳನ್ನು ಮಾಡುವವನಾಗಲೀ ಇಲ್ಲ. ಆದುದರಿಂದ ರಾಕ್ಷಸರಿಂದ ನನಗೆ ಭಯವೆನ್ನುವುದೇ ಇಲ್ಲ. ಧರ್ಮಕ್ಕಾಗಿ ಯುದ್ಧಮಾಡುತ್ತಿರುವಾಗ ನನ್ನ ಶರೀರದಿಂದ ಶಸ್ತ್ರಗಳಿಂದ ಗಾಯಗೊಳ್ಳದಿರುವ ಎರಡು ಅಂಗುಲ ಪ್ರದೇಶವೂ ಇಲ್ಲ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ? ನನ್ನ ರಾಷ್ಟ್ರದಲ್ಲಿ ಎಲ್ಲರೂ ಗೋಬ್ರಾಹ್ಮಣರಿಗೆ ಮತ್ತು ಯಜ್ಞಗಳಿಗೆ ನಿತ್ಯವೂ ಮಂಗಳಾಶಾಸನೆಗಳನ್ನು ಹೇಳುತ್ತಾರೆ. ಹೀಗಿದ್ದರೂ ನೀನು ನನ್ನ ಶರೀರವನ್ನು ಏಕೆ ಪ್ರವೇಶಿಸಿರುವೆ?”

ರಾಕ್ಷಸನು ಹೇಳಿದನು:

“ಕೈಕೇಯ! ಸರ್ವ ಅವಸ್ಥೆಗಳಲ್ಲಿ ನೀನು ಧರ್ಮವನ್ನೇ ಕಾಣುತ್ತಿರುವೆ. ಆದುದರಿಂದ ನೀನು ಕುಶಲನಾಗಿ ನಿನ್ನ ಮನೆಗೆ ಹೋಗಬಹುದು. ನಾನು ಹೋಗುತ್ತೇನೆ. ಕೇಕಯ! ಯಾವ ರಾಜನು ಗೋಬ್ರಾಹ್ಮಣರನ್ನು ರಕ್ಷಿಸಿ ಪ್ರಜೆಗಳನ್ನೂ ರಕ್ಷಿಸುತ್ತಾನೋ ಅಂಥವನಿಗೆ ರಾಕ್ಷಸರಿಂದ ಭಯವಿಲ್ಲದಿರುವಾಗ ಮನುಷ್ಯರಿಂದ ಭಯವು ಹೇಗೆತಾನೇ ಉಂಟಾದೀತು? ಯಾರ ಮುಂದೆ ಬ್ರಾಹ್ಮಣರಿದ್ದಾರೋ, ಯಾರಿಗೆ ಎಲ್ಲಕ್ಕಿಂತ ಹೆಚ್ಚಿನ ಬಲವು ಬ್ರಾಹ್ಮಣನೇ ಆಗಿರುವನೋ, ಯಾರ ರಾಜ್ಯದಲ್ಲಿ ನಾಗರೀಕರು ಅತಿಥಿಪ್ರಿಯರಾಗಿರುವರೋ ಅಂತಹ ರಾಜನು ನಿಶ್ಚಯವಾಗಿಯೂ ಸ್ವರ್ಗವನ್ನು ಜಯಿಸುತ್ತಾನೆ.”

***

ಭೀಷ್ಮನು ಹೇಳಿದನು:

“ಆದುದರಿಂದ ಬ್ರಾಹ್ಮಣರನ್ನು ರಕ್ಷಿಸಬೇಕೆಂದು ತಿಳಿದುಕೋ. ಬ್ರಾಹ್ಮಣರನ್ನು ರಕ್ಷಿಸಿದವರನ್ನು ಅವರು ರಕ್ಷಿಸುತ್ತಾರೆ. ರಾಜನಿಗೆ ಅವರ ಆಶೀರ್ವಾದಗಳು ದೊರೆಯುತ್ತವೆ ಮತ್ತು ರಾಷ್ಟ್ರವು ಚೆನ್ನಾಗಿ ಅಭಿವೃದ್ಧಿಗೊಳ್ಳುತ್ತದೆ. ಆದುದರಿಂದ ರಾಜನಾದವನು ಪ್ರಜಾನುಗ್ರಹ ಕಾರಣದಿಂದ ವಿಶೇಷವಾಗಿ ಸ್ವಕರ್ಮದಲ್ಲಿ ತೊಡಗಿರದ ಬ್ರಾಹ್ಮಣರನ್ನು ನಿಯಂತ್ರಿಸಿ ಅವರನ್ನು ಬೇರ್ಪಡಿಸಬೇಕು. ಪೌರಜನಪದರೊಂದಿಗೆ ಹೀಗೆ ವರ್ತಿಸುವ ರಾಜನು ಇಲ್ಲಿ ಮಂಗಳರೂಪ ಸುಖವನ್ನೂ ಅವಸಾನಾನಂತರದಲ್ಲಿ ಇಂದ್ರಲೋಕವನ್ನೂ ಪಡೆಯುತ್ತಾನೆ.”

The other spiritual discourses in Mahabharata (Kannada):

  1. ತೀರ್ಥಯಾತ್ರಾಮಹಾತ್ಮೆ: ಭೀಷ್ಮ-ಪುಲಸ್ತ್ಯರ ಸಂವಾದ
  2. ಧೌಮ್ಯನು ಯುಧಿಷ್ಠಿರನಿಗೆ ತೀರ್ಥಯಾತಾಕ್ಷೇತ್ರಗಳನ್ನು ವರ್ಣಿಸಿದುದು
  3. ಯುಧಿಷ್ಠಿರ-ಮಾರ್ಕಂಡೇಯ ಸಂವಾದ
  4. ಸರಸ್ವತೀಗೀತೆ
  5. ಕೌಶಿಕ-ಪತಿವ್ರತೆ-ಧರ್ಮವ್ಯಾಧ
  6. ವಿದುರನೀತಿ
  7. ಸನತ್ಸುಜಾತಿಯ
  8. ಭೌಮಗುಣಕಥನ
  9. ಶ್ರೀಮದ್ಭಗವದ್ಗೀತಾ
  10. ಸೇನಜಿತ್-ಬ್ರಾಹ್ಮಣ ಸಂವಾದ; ಪಿಂಗಲ ಗೀತೆ
  11. ಪಿತಾಪುತ್ರ ಸಂವಾದ
  12. ಶಮ್ಯಾಕಗೀತೆ
  13. ಮಂಕಿಗೀತೆ
  14. ಭೃಗು-ಭರದ್ವಾಜ ಸಂವಾದ
  15. ಸಾಂಖ್ಯ ಯೋಗ: ಯಾಜ್ಞವಲ್ಕ್ಯ-ಜನಕ ಸಂವಾದ

Continue reading...
 
Top